ಬಂಡೆದ್ದು ಬದುಕೇವು

ಬಡವರಾದೆವು ನಾವು
ಬಂಧುಗಳು ಯಾರುಂಟು?
ನಾವು ಬಸಿದಾ ಬೆವರು
ಯಾರ ಹೊಟೇಲುಂಟು ?

ಕಣ್ಣ ಹನಿ ಹರಿಸಿದೆವು
ಮಗುವಂತೆ ಬೆಳಸಿದೆವು
ಕಂಡೋರ ಮನೆಗೆಲ್ಲ
ಕೊಟ್ಟು ಬಂದೆವಲ್ಲ
ತಲೆ ಮ್ಯಾಲೆ ಸಾಲ
ಹೊತ್ತು ತಂದೆವಲ್ಲ.

ಮೂಳೆ ಮೂಳೆಯ ತೇದು
ಬೆಳೆಸಿದೆವು ನಾವು
ನಮ್ಮ ಕಂದಮ್ಮಗಳು
ನಮಗಿಲ್ಲವೆ?
ನಮ್ಮ ಕೈಯ್ಯಾರ
ಬಾಳ ಕೊಲ್ಲಿಸುತಾರೆ
ಕಿವಿ ಕಣ್ಣು ಕರುಳು
ಇಲ್ಲಿಲ್ಲವೆ?

ಬಟ್ಟೆ ಕೇಳಿದರೆ
ಗೊಮ್ಮಟನ ತೋರುವರು
ಹೊಟ್ಟೆ ಹಸಿವೆಂದರೆ
ವ್ರತವೆಂದು ಹೇಳುವರು.

ಬಡವರು ನಾವೆಂದು
ಬೇರಾರು ಮೂಸೊಲ್ಲ
ಕಂಡೋರ ಒಡಲಿಗೆ
ದುಡಿಯೋಯ ನಿಂತಿಲ್ಲ.

ಬಂಧುಗಳು ಯಾರಿಲ್ಲ
ಸಾವು ಬಂದೈತೆ
ದಾರಿಗುಂಟ ಒಳ್ಳೆ
ಸೀರೆ ಹಾಸೈತೆ.

ಸಾವು ಬಂದೈತೆಂದು
ಹೋದೇವ ನಾವು?
ಬಂಧುಗಳೆ ಇಲ್ಲೆಂದು
ಭೂಮಿ ಬಿಟ್ಟೇವ?
ಸಾವ ಸರದಾರನ
ಸೋಲಿಸಿ ಕಳಿಸೇವು
ಬಂಡೆದ್ದು ಭೂಮೀಲೆ
ನಾವು ಬದುಕೇವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗತೀಕರಣದ ಆತಂಕಗಳು
Next post ಸರಳವಾಗಿ ಬದುಕುವುದೇ ಲೇಸು

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys